Pages

Monday, May 8, 2023

ಚಿತ್ರ ಬರಹ - ಎಲ್ಲಿ ಹೋಗುವಿರಿ ಮೋಡಗಳೇ :-(

ಕರಾವಳಿಗರು ಆಕಾಶವನ್ನೇ ನೋಡುತ್ತಿದ್ದಾರೆ. ಬಹಳಷ್ಟು ಜಾಗದಲ್ಲಿ ಬೇಸಿಗೆ ಮಳೆಯೇ ಬಿದ್ದಿಲ್ಲ ಈ ಬಾರಿ. ಎಲ್ಲಾ ಬೆಂಗಳೂರಲ್ಲೇ ನಿಂತಿದಾವೋ ಏನೋ ಅನ್ನೋದು ಬಹು ಜನರ ಸಂಶಯ. ಹಲವು ಮೋಡಗಳು ಅತಿಥಿಗಳಂತೆ ಕತ್ತಲು ತರುತ್ತದೆಯಾದರೂ ಮಳೆ ಮಾತ್ರ ಸುರಿಯುತ್ತಿಲ್ಲ. ಬಿಸಿಲ ಬೇಗೆಗೆ ಧರಣಿ ಬವಳಿ ಸೊರಗಿಹೋಗಿದೆ. ಇನ್ನಾದರೂ ಮಳೆ ಸುರಿಯಲಿ ಎಂಬುದು ಇಲ್ಲಿನ ಜನರ ಪ್ರಾರ್ಥನೆ.



ನಾನು ಕೂಡಾ ಬೇಸರದಲ್ಲಿ ಮೋಡಗಳನ್ನೇ ದುರುಗುಟ್ಟಿ ನೋಡುತ್ತಾ ಬರೆದ ಪ್ರಾಸ :-(

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ

ಕಾಯುತ್ತಿದೆ ಬಹುದಿನದಿಂದ ಬರಡು ಇಳೆ

ಮಳೆಯ ಸುರಿಸಿ ತೊಡಿಸಿ ಹಸಿರ ಬಳೆ

ವೃದ್ಧಿಸಿ ಕರಾವಳಿಯ ಪ್ರಾಕೃತಿಕ ಕಳೆ



ಆದಷ್ಟು ಶೀಘ್ರದಲ್ಲೇ ವರುಣ ದೇವಾ ನಮ್ಮನ್ನು ಹರಸಿ ಭೂಮಿ ತಣ್ಣಗಾಗಿಸಲಿ ಎಂದು ಪ್ರಾರ್ಥಿಸೋಣ 🙏

No comments:

Post a Comment