Friday, October 30, 2015

ಬ್ಯಾಕೆಂಡ್-೧

ಬೆಂಗಳೂರು ಅಥವಾ ಕರ್ನಾಟಕದ ವಾಹನಗಳ ಹಿಂದಿನ ಬದಿಯ ವಿಶಿಷ್ಟ ಲೇಬಲ್ ಗಳನ್ನು ಕ್ಲಿಕ್ಕಿಸಿ ಬ್ಲಾಗ್ ಪುಟಕ್ಕೆ ಅಂಟಿಸಿ ಅದಕ್ಕೆ ವಿಶಿಷ್ಟ ಅರ್ಥ ಕಲ್ಪಿಸುವ ಈ ಸರಣಿಯೇ ಬ್ಯಾಕೆಂಡ್. ಚಿತ್ರಗಳು ಸಿಕ್ಕಿದಂತೆ ಇಲ್ಲಿ ಪೋಸ್ಟ್ ಮಾಡುತ್ತೇನೆ. ಈ ಸರಮಾಲೆ ಯಾರನ್ನೋ ಅಣಕವಾಡಲು ಅಥವಾ ಸ್ವಹಿತಾಸಕ್ತಿಗೆ ಬಳಸಿಕೊಳ್ಳಲು ಬರೆದಿಲ್ಲ. ಬದಲಾಗಿ ನನ್ನ ವ್ಯಾಖ್ಯಾನ ನೀಡಲು ಇಚ್ಚಿಸುತ್ತೇನೆ (ಕೆಲವೊಮ್ಮೆ ಹಾಸ್ಯಮಯವಾಗಿ). ಇನ್ನೇಕೆ ತಡ! ಶುರು ಮಾಡೋಣವೇ ;).

೨ ತಿಂಗಳ ಹಿಂದೆ ಹೆಬ್ಬಾಳ ಸಿಗ್ನಲ್ ಬಳಿ ಅರಚುವ ಟ್ರಾಫಿಕ್ ಮಧ್ಯೆ ತೆಗೆದ ಚಿತ್ರ :).

"ನೋಡೆ ನನ್ನ ಬಂಗಾರಿ, ಇದೇ ನನ್ನ ಅಂಬಾರಿ"




ಏನು ಇರಬಹುದು ಇದರ ಮರ್ಮ? ಬಹುಶಃ ತನ್ನನ್ನು ಮದುವೆ ಮಾಡಿಕೊಳ್ಳುವವಳಿಗೆ ಮೊದಲ ಸನ್ನೆಯೇ ಅಥವಾ ಮದುವೆಯ ನಂತರ ಈ ವಾಹನದಲ್ಲೇ ಮನೆಗೆ ತೆರಳಬೇಕೋ? ಅಂಬಾರಿ ಎಂದಾಕ್ಷಣ ನಿಮ್ಮ ವಾಹನವನ್ನು ಅದರ ಮೇಲೆ ಹತ್ತಿಸಲು ಹೋದಿರಿ ಜೋಕೆ ;).

ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್

Sunday, October 25, 2015

ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೋ!

ರಾಜ್ಯದಲ್ಲಿ ಇತ್ತೀಚೆಗೆ ಭಾಗ್ಯಗಳದ್ದೆ ಕಾರುಬಾರು. ಜನಸಾಮಾನ್ಯರ ತೆರಿಗೆಯ ಹಣದಿಂದ ಸರಕಾರವು ತನಗೆ ಬೇಕಾದವರಿಗೆ ಪುಕ್ಕಟೆಯಾಗಿ ಭಾಗ್ಯಗಳನ್ನು ಧಾರೆ ಎರೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ! ತಮ್ಮವರನ್ನು ಓಲೈಸಲು (ಪೊಲಿಟಿಕಲೀ ಡ್ರಿವೆನ್ ಅನ್ನಬಹುದು) ಭಾಗ್ಯಗಳ ಸರಮಾಲೆಯನ್ನೇ ಕರುಣಿಸಿದೆ. ಮದುವೆ ಭಾಗ್ಯ, ಅನ್ನ ಭಾಗ್ಯ, ಕ್ಷೀರಭಾಗ್ಯ ಹೀಗೆ ಕೆಲವು ಉದಾಹರಣೆಗಳು. ಮದುವೆ ಭಾಗ್ಯದ ನಂತರ ಮುಂದೆ ಭಾಗ್ಯದ ಸುಪರ್ದಿಗೆ, ಮನೆ ಖರ್ಚಿಗೆ ಶಾಪಿಂಗ್ ಭಾಗ್ಯ, ಮಗುವಾದ ಬಳಿಕ ಹೆರಿಗೆ ಭಾಗ್ಯ, ಕುಟುಂಬ ಸಾಗಲು ಸಂಸಾರ ಭಾಗ್ಯ, ಓದಲು ಶಾಲೆ ಭಾಗ್ಯ, ಹೀಗೆ ಭಾಗ್ಯದ ಓಕುಳಿಯೇ ಹರಿಯಬಹುದು. ಸಂಸಾರ ಸರಿಹೊಂದದವರಿಗೆ ವಿಚ್ಛೇದನ ಭಾಗ್ಯ ಕೂಡ ಸೇರಬಹುದು. ಗೋವು ಕಳ್ಳರಿಗೆ ರಕ್ಷಣೆ ಮತ್ತು ಪರಿಹಾರ ಭಾಗ್ಯ (ನನ್ನ ಊರಿನಲ್ಲೇ ಬಹಳಷ್ಟು ಕೇಳಿದ್ದೇನೆ). ಸೋಜಿಗವೆಂದರೆ, ಅನ್ನಭಾಗ್ಯದ ಅಕ್ಕಿಯು ಕಾಳಸಂತೆಯಲ್ಲಿ ಸುಮಾರು ೨೦ ರುಪಾಯಿಗೆ ಮಾರಾಟವಾಗುತ್ತಿದೆ ಎನ್ನುವುದು ಹಳೆ ಸುದ್ಧಿ. ಭಾಗ್ಯಗಳ ಸುಪರ್ದಿಗೆ ಇತ್ತೀಚಿಗೆ 'ಸೈಟು ಭಾಗ್ಯ' ಕೂಡ ಸೇರಿಕೊಂಡಿದೆ ಎಂಬುದು ದಿನಪತ್ರಿಕೆಗಳ ಸುದ್ಧಿ. ಎಲ್ಲಾ ಭಾಗ್ಯಗಳನ್ನು ಪಡೆದುಕೊಂಡವರಿಗೆ ರಾಜಯೋಗ ಎಂದರೆ ತಪ್ಪಾಗದು ಅಥವಾ ಅಖಂಡ ಸೋಮಾರಿ ಭಾಗ್ಯ ಎನ್ನಲೂಬಹುದು. ಭಾಗ್ಯಾಧಿಪತಿಯಾದ ಗುರುಗ್ರಹವು ಸಿಂಹರಾಶಿಯಲ್ಲಿರುವುದರಿಂದ, ಸಿಂಹ ಭಾಗ್ಯ ಎಂದರೂ ತಪ್ಪಾಗದು. ಈ ಎಲ್ಲಾ ಭಾಗ್ಯಗಳನ್ನು ದಯಪಾಲಿಸಿದ ಸರಕಾರಕ್ಕೆ ಕರೆಂಟು ಖರೀದಿಸಲು ಹಣವಿಲ್ಲವಂತೆ! ಓಟ್ಟಾರೆ ತೆರಿಗೆ ಕಟ್ಟುವ ಸಾಮಾನ್ಯ ನಾಗರಿಕನಿಗೆ ತೆರಿಗೆ ಹೆಚ್ಚಳದ ದುರ್ದೈವ ಭಾಗ್ಯ (ದಾರಿದ್ರ್ಯ ಭಾಗ್ಯ ಎಂದರೂ ತಪ್ಪಾಗದು). ಹಾಗೆ ಅರ್ಚಕರಿಗೆ ಈಗ ಕಡಿತದ ಭಾಗ್ಯ. ಅವರಿಗೆ ಸಂದಾಯವಾಗುತ್ತಿರುವ ಕಾಸಿಗೂ ಪಿಕ್ಕಾಸಿ ಹಾಕಿದ್ದಾರೆ ನಮ್ಮ ಘನ ಸರಕಾರ!. [ಸೆಕ್ಯುಲರಿಸಂ ನೆಪದಲ್ಲಿ ಕೂಡ ಇರಬಹುದು.  ಶಾದಿ ಭಾಗ್ಯಕ್ಕೆ ಹಣ ಬೇಡವೇ ;)]

ಅಂದ ಹಾಗೆ, ಬೆಂಗಳೂರಿನ ರಸ್ತೆಗಳಲ್ಲೆಲ್ಲಾ ಹೊಂಡಗಳದ್ದೆ ಕಾರುಬಾರು. ಶಿರಾಡಿ ರಸ್ತೆ ಇತ್ತೀಚೆಗೆ 'ಕಾಂಕ್ರೀಟ್ ಭಾಗ್ಯ'ದಿಂದ ಕಂಗೊಳಿಸುತ್ತಿರುವ ಬೆನ್ನಲ್ಲೇ, ಬೆಂಗಳೂರಿನ ರಸ್ತೆಗಳು ಅಗ್ರಪಟ್ಟಿಯನ್ನು ಅಲಂಕರಿಸಿಕೊಂಡಿವೆ (ಕಳಪೆ ಗುಣಮಟ್ಟದಲ್ಲಿ). ಹೊಸ ರಸ್ತೆ ನಿರ್ಮಿಸುವಷ್ಟರಲ್ಲಿ, ಮಳೆಯಿಂದಲೋ ಅಥವಾ ಜಲಮಂಡಳಿ ಕೃಪೆಯಿಂದಲೋ, ಹೊಸ ಬಗೆಯ ಹೊಂಡಗಳು ಸೃಷ್ಟಿಯಾಗುತ್ತವೆ.

ಬಹುಶಃ ಪುರಂದರದಾಸರ ಕೀರ್ತನೆಯನ್ನು ಹೀಗೆ ಮಾರ್ಪಾಟು ಮಾಡಬಹುದು!

ಅಲ್ಲಿ ನೋಡಲು ಹೊಂಡ
ಇಲ್ಲಿ ನೋಡಲು ಹೊಂಡ
ಎಲ್ಲೆಲ್ಲಿ ನೋಡಿದರಲ್ಲಿ ಯಮ ಹೊಂಡ


ಬೈಕ್ ನವರ ಪಾಡಂತು ಹೇಳತೀರದು. ಎಂದು ಬೆನ್ನ ಮೂಳೆ ಕೈಗೆ ಸಿಗುವುದೋ ಎಂಬುದು ತಿಳಿಯದು. ಮಳೆ ಬಂತೆಂದರೆ ರಸ್ತೆಗಳು ಅಪ್ಪಟ "ಡರ್ಟ್ ಟ್ರಾಕ್" ಆಗಿ ಮಾರ್ಪಾಟುಗೊಳ್ಳುತ್ತವೆ. ಬಹುಶಃ ಇದಕ್ಕೆ "ಕೆಸರು ಭಾಗ್ಯ" ಎಂದರೂ ತಪ್ಪಾಗದು ಅದು ಕೂಡ ಉಚಿತವಾಗಿ.

ಹೀಗೆಯೆ ಮುಂದುವರೆದರೆ ಮುಂದೊಂದು ದಿನ ಬೆಂಗಳೂರಿನ ಚಿತ್ರಣವನ್ನು ಕೆಳಗೆ ತಿಳಿಸಿದಂತೆ ಬದಲಿಸಬಹುದು!

ಹೊಂಡದೂರು ಬೆಂಗಳೂರು
ಬೆನ್ನು-ನೋವಿನ ತವರೂರು!


ಸಾವಿರದ ಮನೆಯಿಂದ ಸಾಸಿವೆ ಕಾಳನ್ನು ತಾ ಎಂದ ಬುದ್ಧ;
ಬಹುಶಃ ಈಗ ಹೊಂಡವಿಲ್ಲದ ರಸ್ತೆಯನ್ನು ಬೆಂಗಳೂರಿನಲ್ಲಿ ತೋರಿಸು ಬಾ ಎಂಬಂತಾಗಿದೆ.

ಇತ್ತೀಚಿನ ಸುದ್ಧಿಯ ಪ್ರಕಾರ ಹಲವು ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಪಾರಿತೋಷಕದ ಜೊತೆಗೆ ಹಣವನ್ನು ವಾಪಸ್ ಮಾಡಿದರೆ ಅದನ್ನು ಹೊಂಡ ಮುಚ್ಚಲು ಸರಾಗವಾಗಿ ಬಳಸಬಹುದು.

ಡಿ.ವಿ.ಜಿಯವರ ಕಗ್ಗವನ್ನು ಸ್ವಲ್ಪ ಮಾರ್ಪಾಡು ಮಾಡುತ್ತಾ, ನಾಗರಿಕರು ಹೀಗೆಂದುಕೊಂಡು ಸಮಾಧಾನಪಟ್ಟಿಕೊಳ್ಳಬಹುದು

ಇರುವ ಭಾಗ್ಯಗಳನ್ನೆಲ್ಲ ಪಡೆದು
ರಸ್ತೆ ಹೊಂಡಮಯವೆನ್ನುವುದಾ ಬಿಡು
ಪಾತಾಳಕ್ಕಿದೇ ದಾರಿ ನಂದತಿಮ್ಮ


ಹಾಗೆಯೇ ಸರಕಾರದವರು ಹೀಗೆಂದುಕೊಂಡು ಜನರ ಬಾಯಿ ಮುಚ್ಚಿಸಬಹುದು!

ಇರುವುದೆಲ್ಲವ ಭಾಗ್ಯವ ಕೊಟ್ಟು
ಖಜಾನೆ ಬರಿದೆನ್ನುವುದಾ ಬಿಡು
ಸರಕಾರಕ್ಕಿದೇ ದಾರಿ ನಂದತಿಮ್ಮ


ಸರಕಾರದ ಬಿಟ್ಟಿ ಸವಲತ್ತುಗಳನ್ನು ಪಡೆದುಕೊಂಡವರು "ನಮ್ಮ ಭಾಗ್ಯ ದೊಡ್ಡದೋ ನಿಮ್ಮ ಭಾಗ್ಯ ದೊಡ್ಡದೋ" ಎಂದು ತೆರಿಗೆದಾರರನ್ನು ಅಣಕವಾಡುವಂತಿದೆ.

ಕೊನೆಯ ಭಾಗ್ಯ:

ಹಸಿರು ಹೊದಿಕೆಯ ಮೇಲೆ ನಿರಂತರವಾಗಿ ಸಿಮೆಂಟಿನ ಮರಳುಗಳನ್ನು ಸಿಂಪಡಿಸುತ್ತಿರುವ ನಮಗೆ ಈ ಬಾರಿ ಪ್ರಕೃತಿಯು 'ಬರ ಭಾಗ್ಯ' ಕರುಣಿಸಿ ಆಶೀರ್ವದಿ(ಧಿ)ಸಿದೆ. ಕರೆಂಟ್ ಇಲ್ಲದೇ ಶಾಕ್ ಭಾಗ್ಯ ಜೊತೆಗೆ ಕತ್ತಲು ಭಾಗ್ಯ ಉಚಿತವಾಗಿ ಇದರೊಂದಿಗೆ ದೊರೆತಿದೆ. ಸಾವಿರಾರು ಕೋಟಿ ತೆರಿಗೆದಾರರ ಹಣವನ್ನು ತನ್ನ ಪ್ರತಿಷ್ಠೆ ಉಳಿಸಿಕೊಳ್ಳಲು ಎತ್ತಿನಹೊಳೆ ಯೋಜನೆಗೆ ಸುರಿಯುತ್ತಿರುವ ಸರಕಾರ, ಸುಂದರ ಪಶ್ಚಿಮ ಘಟ್ಟದ ಕಣಿವೆಗಳಿಗೆ "ಸಮಾಧಿ ಭಾಗ್ಯ"ವನ್ನು ಕರುಣಿಸಿದೆ. ಮೊದಲೇ ಕುಂಠಿತಗೊಂಡಿರುವ ಮುಂಗಾರಿನ ಮಧ್ಯೆ, ವಿಜ್ಞಾನಿಗಳ ಮಾತುಗಳಿಗೂ ಕಿವಿಗೊಡದೆ ತನ್ನ ಅಜ್ಞಾನವನ್ನು ಪ್ರದರ್ಶಿಸಿದೆ. ತಮ್ಮ ವಿಲಾಸಿ ಜೀವನಕ್ಕೆ ವನ್ಯ ಸಂಪತ್ತನ್ನು ಪರೋಕ್ಷವಾಗಿ ನಾಶಪಡಿಸುತ್ತಿರುವ ಶೋಕಿ ಜನಾಂಗವು, ಮುಂದೆ "ಗುಡಿಸಲಿದ್ದರೂ ಪರವಾಗಿಲ್ಲ ನೀರಿದ್ದರೆ ಸಾಕು" ಎಂದು ಗೋಳಿಡುವ  ದಿನ ದೂರವಿಲ್ಲ.

Thursday, October 15, 2015

ವಾಟ್ಸ್ ಆಪ್ ಮಹಿಮೆ - ಬಣ್ಣದ ಹೂವುಗಳು

ಜಗವು ಸಾಮಾಜಿಕ ತಾಣಗಳಿಗೆ ತಲೆಬಾಗಿದೆ. ಅದರ ಕೆಲವು ವಿರೋಧಾಭಾಸದ ಛಾಯೆಗಳನ್ನು ಇಲ್ಲಿ ತೋರ್ಪಡಿಸಲು ಪ್ರಯತ್ನ ಪಟ್ಟಿದ್ದೇನೆ. ಇಂತಹ ಬರಹಗಳು ಯಾರನ್ನು ದೂಷಿಸಲು ಅಥವಾ ವ್ಯವಸ್ಥೆಯನ್ನು ಖಂಡಿಸುವ ಸಲುವಾಗಿ ಬರೆದುದಲ್ಲ. ಬದಲಾಗಿ ಜೀವನದ ವಿಪರ್ಯಾಸಗಳನ್ನು ಬಿಂಬಿಸುವ ಪ್ರಯತ್ನವಷ್ಟೆ! ಇಂತಹ ಸರಣಿಗಳು ಅನುಭವದ ಮಾತುಗಳೇ ವಿನಃ ಕಟ್ಟುಕಥೆಗಳಲ್ಲ ಎನ್ನುವ ಖಾತರಿಯನ್ನು ನಾನು ನೀಡಬಯಸುತ್ತೇನೆ :). ಹಾಗೆಯೇ ಈ  ಸರಣಿಯ ಮೊದಲನೆಯ ಥೀಮ್ "ಬಣ್ಣದ ಹೂವುಗಳು".

ಹಬ್ಬದ ದಿನದ ಪೂಜೆಯ ಬಳಿಕ ಬಂಧುಮಿತ್ರರ ಮನೆಯ ದೇವರ ಅಲಂಕಾರವನ್ನು ಕಂಡು ಅವಳು ಆನಂದಿಸಿದ್ದೆ ಆನಂದಿಸಿದ್ದು. ತನ್ನವರ ಮನೆಯ ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಂಡ ಭಗವಂತನ ಸೌಂದರ್ಯವನ್ನು ಹಲವು ಕೋನಗಳಿಂದ ಕಂಡು ಉತ್ಸಾಹ ಪಟ್ಟಳು. ಅಲ್ಲಿ ಉಪಯೋಗಿಸಿದ ಬಹುವಿಧದ ಹೂವುಗಳ ಬಗ್ಗೆ ಗಂಡನ ಬಳಿ ಅರುಹುತ್ತಿದ್ದಳು. ಪೋಸ್ಟ್ ಗಳನ್ನು ತಿರುವಿ ತಿರುವಿ, ಚಿತ್ರಗಳನ್ನು ಜೂಮ್ ಮಾಡಿ ಅವರು ಉಪಯೋಗಿಸಿದ ಪುಷ್ಪಗಳ ಮೇಲೆ ದೃಷ್ಟಿ ಹಾಯಿಸುತ್ತಿದ್ದಾಗ ಸಮಯ ಸರಿದದ್ದೇ ತಿಳಿಯಲಿಲ್ಲ.

ಹಬ್ಬದ ಮುಂಚಿನ ದಿನ ಹೂವು ಮಾರುವವಳು ಇವಳಿಗೆ ಕೆಲವು ಹೊಸದಾದ ಬಣ್ಣದ ಹೂವುಗಳನ್ನು ಉಚಿತವಾಗಿ ನೀಡಿದಳು. ಅವಳಿಗೆ ಈ ಹೂವುಗಳು ಮೊದಲು ಪರಿಚಯವಾದದ್ದು ಆಗಲೇ. "ಇರ್ಲಿ ಬಿಡಿ ಅಕ್ಕ ಪೂಜೆಗೆ ನಂದು ಒಂದು ಕಾಣಿಕೆ ಇಡ್ಕೊಳಿ" ಎಂಬುದು ಹೂವು ಮಾರುವವಳ ಅಭಿಮಾನದ ಮಾತು.

ಹಬ್ಬ ಎಲ್ಲ ಜೋರಾಗಿ ನಡೆಯಿತು ಜೊತೆಗೆ ನಾನಾ ವಿಧದ ಪೋಸ್ಟ್ ಗಳ ಹಬ್ಬ ಕೂಡ.ಹಬ್ಬದ ಮರುದಿನ ಅವಳಿಗೆ ಬಣ್ಣದ ಹೂವುಗಳು ಥಟ್ಟನೆ ನೆನಪಾಗಿ, "ಈ ಹೂವುಗಳನ್ನು ಹಬ್ಬಕ್ಕೆ ಬಳಸಬಹುದಾಗಿತ್ತು" ಎಂದು ಗಂಡನ ಬಳಿ ಹೇಳಿಕೊಂಡಳು. ಗಂಡ ಏನೂ ಮಾತನಾಡದೆ ಹಾಗೆ ಮುಗುಳ್ನಗೆ ಬೀರಿ ಹೊರಟುಹೋದ. ಮಡದಿಗೆ ಗಂಡನ ವರ್ತನೆ ಅರ್ಥವಾಗದೆ ಹೋಯಿತು.

ಪೋಸ್ಟ್ ಗಳನ್ನು ತಿರುವಿಸುವ ಸಂಭ್ರಮದಲ್ಲಿ ಹಬ್ಬದ ದಿನದಂದು ತನ್ನ ಮನೆಯ ಗಣಪನ ಮುಡಿಗೇರಿಸಿದ್ದ ಹೊಸದಾದ ಬಣ್ಣದ ಹೂವುಗಳು ಅವಳ ಗೋಚರಕ್ಕೆ ಬಾರದೆ ಹೋಯಿತು

Sunday, October 4, 2015

Green fields, sturdy mangroves and highway expansion -- a short musing of a nomad

A predictable muggy day of coastal Karnataka.. monsoon has taken permanent back-seat for this year. Every year monsoon season is on down-trend and this time the plunge is steep! The overnight bus journey coupled with breakdown of chariot (we shifted 3 buses) tuck me in arms of morpheus. A short slumber during local commute somewhat balanced the delta. It was almost complete after banquet meal in in-laws house.

After savouring lavish feast & soothing sleep in in-laws house near Kundapura, with regained energy,  I started back to my beautiful village. Hitherto, I was only glancing in my retina towards the expansive backwaters of Kundapura and it was time for a change. While on the way, I realized there is lot to experience with nature. Instead of boarding bus at the nearest bus stop, I decided to have long leap of 1.5kms towards next stop to enjoy nature. The verdancy of monsoon was still alive despite the paltry rainfall. I continued my jaunt along the hot bitumen surface with cool glimpses of nature, snapping pictures dear to my eyes. Here is the short scribe of my exploration of that one km trail bounded by scenic landscape. All the pictures, emotions described here solely articulated by me and not stolen which is tantamount to "I own the rights" too ;). What was intended to be a candid photo-walk transformed into a intense rambling. Hope you enjoy the the nature and natural emotions from the jaunt.

FIRST GLIMPSE

THESE HAVE NOTHING TO WORRY


These backwaters are consequence of tidal waves of Arabian sea ramming towards shoreline.
Everyday, they raise during day & fall during night but never refrain from chore.
The backwaters are endowed with enchanting mangrove trees.

EXHILARATING BACKWATERS
HOPE I HAD TIME TO DESCEND

The fishing, nature & road work.. all in one!
PANORAMIC VIEW
A TINY SHIPYARD


The highway expansion from Kundapur to Karwar is in full swing and pillars are getting ready to bear heavy vehicular load.
It is easy to convince nature for the sake of civilization & you never know when it rebukes.
Rather than admiring nature, emotions of my soul inverted after glancing the highway work.

ROAD WORK ALONG RIVER BODY
HOPE THESE FOUNDATIONS ARE STRONG, UNINFECTED BY CORRUPTION
Idyllic views of mangrove landscape.
Soon this patch of placid nature will bear the additional thrust of swarming wagons and their nauseated howls.

DISTANT MANGROVES


The backwaters flanked by beautiful mangroves and green paddy fields shortly will witness their termination.
Mangroves which are bulwarks against Tsunami waves are facing wrath of impending devastation.






These scenes will last only for few years.
The treevilization will soon succumb to vandalism of civilization.
Civilization is fast modernizing at the cost of nature.
Nature is not keeping quiet and diminishing monsoon every year connotes its retaliation
THESE TREES WONT REACH MATURITY






The brewing demise of upright mangroves is inevitable.
These Mangroves will be obliterated owing to the onslaught of modernization. 
Whatever covered here is delta scene out of colossal devastation of nature carried out in name of highway expansion


The nature is always victimized to superfluous demands of mankind





The shrilled honks & shock waves of movement will be more closer to this house.




Safe for now!!
-



Never knew a short stroll would concoct such an elaborate story. Usually I keep these feelings to myself rather than expressing with people (including closer ones). This avoids de-motivation in form of parody and will sustain my enthu. Moreover, I scribble for my own experience rather than flaunting with anyone. The only bragging portion is of-course sharing post with like minded people!

In the end, I am normal citizen who adorn the blog with snazzy pictures with alluring metaphors. I am just trespasser who spew few words about conservation of nature (so called green earth) and want electricity which swallows humongous of vegetation and wants transportation which imbues toxic to atmosphere and wants concrete house which emits dust towards stratosphere and wants glossy furniture which axes long trees and ..balderdash! Next time I watch them, the nature is demolished and my post still alive in corner of some remote digital surface in 1s and 0s

An orthogonal scribe:

I wished to scamper down for a while towards river bed and talk to fisherman & catch few glimpses. Possibly, also snap few frames of Sun soaking the backwaters with its golden light. You know, the clock was ticking and it was  impractical. At the outset of stroll, I even thought it was not wise to carry a camera as it would violate the societal taboo. At the end, I held onto my camera ditching the taboo. Despite realizing that it would embitter many, few dubious thoughts surfaced in my mind.

i) Accept what you cannot change (clock) and when opportunity knocks, revel in solitude
ii) "Be yourself" is contemporary cliché which is difficult to follow. By being yourself, one cannot appease everyone simultaneously if you want to pacify everyone, you cannot be yourself. Its a vicious circle for which I will be judged for sure :) (may be hipster!)

After numerous clichés its time to reach niche. While copious rains create thundering waterfall descending from the cliff, copious sun light created sweatfall descending from my forehead ;). I boarded the bus towards my beautiful village after brief walk for a km.

Right Right!!

Thursday, September 24, 2015

View the light through entangled life

A casual picture with snazzy title :). Shot in Big Banyan Tree near Bangalore.

Sunday, September 20, 2015

Towards the Sun

A capture of golden hour sun snapped in Kaup beach few years back!






Linked to Skywatch Friday

Saturday, September 12, 2015

Pangala new bridge almost ready

Here is some good news. The Pangala bridge which was demolished of yore, is finally rising to a new look with fresh 4 lane almost nearing completion. This bridge is part of four lane activity ongoing from Kundapur to Surathkal branded as National Highway 66 (erstwhile NH-17). Even though the construction had gained pace during the inception of project, the hurdles were primarily land acquisition and litigation. Now all the obstacles seems to have been eradicated and brand new bridge has finished the first 2 lanes. The other side of activity is also ongoing at brisk pace. Soon we can view the brand new completed bridge and hopefully smooth traffic.The reason behind abandoning old highway bridge is because of skewed path. This arrangement took commuters by surprise during night hours and resulted in numerous accidents due to oblique turn. Eventually authorities had to demolish relic bridge and choose an alternative cleaner way. The current path is designed with smooth curvature and proper alignment. Here are the pictures for you! The old landscape can be found here

THE OLD HIGHWAY BRIDGE ADJACENT TO TRUCK
THE NEWLY OPENED FIRST HALF OF BRIDGE
ONE MORE LOOK

Friday, August 28, 2015

Skywatch Friday: Magic Island Tonsepar

A sweltering day of summer in coastal Karnataka. Myself and my better half visited the Tonsepar for brief recreation amidst sticky weather of coastal Karnataka. Even though we reached early, we had to wait our turn to board the ferry since the authorities have to muster minimum 30 humans to start ferry towards uninhabited island. After wait of nearly 45 minutes, we boarded the ferry and reached St.Mary's island in 20 minutes. The funniest part of the journey was the group of people carrying all sorts of food stuffs towards the island for making party (hope they won't spoil the beautiful island). So here are pictures from Tonsepar bounded by volcanic rocks, shell sand, green ocean and coconut trees. The beautiful splashes originated from the barging tidal waves ramming against the age-old sub volcanic rocks presents perfect beauty of nature and a click to shot ;). Hope you enjoy the pictures of our short visit

TIDAL WAVES HAMMERING THE VOLCANIC ROCKS


THE BEAUTY!


SPLASH!





SERIAL COCONUT TREES

THE SPLENDID SHORELINE






FISHING BOAT EN-ROUTE
INCHING TOWARDS CULMINATION
WE ARE ALMOST THERE







I would like to visit once more to this mesmerizing island to capture the glimpses of golden hour sun dazzling between the coconut trees :).

Share your spectacles at Skywatch Friday page

Printfriendly

Related Posts Plugin for WordPress, Blogger...