Monday, August 22, 2022

ಶ್ರೀ ಕ್ಷೇತ್ರ ಹದ್ದಿನಕಲ್ಲು ಯಾತ್ರೆ, ಗೂಗಲ್ ಮ್ಯಾಪ್ ತಾಪತ್ರೆ

ಬಹಳ ವರ್ಷಗಳ ಬಳಿಕ ಹದ್ದಿನಕಲ್ಲು ಕ್ಷೇತ್ರ ಸಂದರ್ಶಿಸುವ ಅವಕಾಶ ಒದಗಿ ಬಂತು. ಶ್ರಾವಣ ಮಾಸದ ಮುಂಚೆ ಇದರ ಯೋಜನೆ ಇದ್ದರೂ ಹಲವು ಕಾರಣಗಳಿಂದ ಹನುಮಂತರಾಯರು ತಡೆಹಿಡಿದಿದ್ದರು. ಮತ್ತು ಅದನ್ನು ತಡೆಹಿಡಿದದ್ದು ಒಳ್ಳೆಯದಕ್ಕೆ ಅಂತಾ ಮನದಟ್ಟಾಯಿತು! ಕೊನೆಗೆ ಯಾಕೆ ಒಳ್ಳೆಯದು ಅಂತಾ ಬರೆದಿದ್ದೇನೆ.

ಬೆಳಗ್ಗೆ ಬೇಗ ಹೊರಡೋಣವೆಂದರೆ ಅನಾವಶ್ಯಕ ಕಾರಣಗಳು. ಹೇಗೂ ೯ಕ್ಕೆ ಗಾಡಿ ಹೋರಡಿತು. ನಾಗಸಂದ್ರ ಶುಲ್ಕ ವಸೂಲಿ ಕೇಂದ್ರಕ್ಕೆ ಬೇಗನೆ ಬಂದರೂ ತದನಂತರ ಗ್ರಹಚಾರ ಕಾದಿತ್ತು. ೩ದಿನ ಸರಣಿ ರಜೆ ಇದ್ದರಿಂದ ಸಿಕ್ಕಾಪಟ್ಟೆ ವಾಹನ ಸಂದಣಿ. ಸುಮಾರು ೪ಕಿ.ಮೀ ಸಂಚರಿಸಲು ಪೂನಾ ಹೆದ್ದಾರಿಯಲ್ಲಿ ೪೦ ನಿಮಿಷ ಒದ್ದಾಡಬೇಕಾಯಿತು. ಬೇಕೆಂದರೆ ಚಿತ್ರ ನೋಡಿ ಕನ್ಫರ್ಮ್ ಮಾಡಿಕೊಳ್ಳಿ

ನೋಡಿದರೆ ಮಂಗಳೂರು ಹೆದ್ದಾರಿಯಲ್ಲಿ ವಾಹನಗಳ ಮೆರವಣಿಗೆಯೇ ಹೆಚ್ಚು. ಏಕಾಗಿ ವಾಹನ ದಟ್ಟಣೆಯಾಯಿತು ಎಂಬುದು ಕೊನೆಗೂ ತಿಳಿಯಲಿಲ್ಲ ಏಕೆಂದರೆ ನೆಲಮಂಗಲ ಜಂಕ್ಸನ್ ಇಂದ ಕೂಡಾ ಜಾಮ್ ಇರಲಿಲ್ಲ. 

ಏನೋ, ಸಮಯ ಅಂತೂ ಬಹಳ ವ್ಯರ್ಥವಾಯಿತು. ಜೊತೆಗೆ ಕಾಮತ್ ಹೋಟೆಲ್ ಅಲ್ಲಿ ತಿಂಡಿ ಎಲ್ಲವೂ ಖಾಲಿ! ಜನ ಸಿಕ್ಕಾಪಟ್ಟೆ ಆದ್ದರಿಂದ ಇಡ್ಲಿ ಮಾತ್ರ ಉಳಿದಿತ್ತು ಅಂತಾ ಹೇಳಿದರು ಹೋಟೆಲಿನ ಕ್ಯಾಶಿಯರ್. ಕಾಮತ್ ಹೋಟೆಲ್ ಯಾಕೆ ಹೊಕ್ಕೇನೋ ನನಗೆ ತಿಳಿಯದು. ಅವರು ಬಸ್ಸು ಬಂದರೆ ಸಾಕು ಎಲ್ಲಾ ಪ್ರಾಮುಖ್ಯತೆ ಪ್ರಯಾಣಿಕರಿಗೆ ನೀಡುತ್ತಾರೆ. ಚಾಲಕರಿಗೆ ಆದಷ್ಟು ಬೇಗ ನೀಡಿ, ಸ್ವಂತ ವಾಹನದಲ್ಲಿ ಬರುವವರ ಕಡೆಗಣಿಸುವುದನ್ನು ಹಿಂದಿನಿಂದಲೇ ನೋಡುತ್ತಿದೆ. ಈ ಬಾರಿಯೂ ಹಾಗೆಯೇ ಆಯಿತು. ಬಸ್ಸು ಹೊರಡುವವರೆಗೂ ನಮ್ಮನ್ನು ಕೇಳುವವರಿರಲಿಲ್ಲ. ತದನಂತರ ಮತ್ತೊಂದು ರಾಜಹಂಸ ಬಂದಾಗಲೂ ಹೋಟೆಲ್ ಅಲ್ಲಿ ಇರುವ ಎಲ್ಲಾ ಕಾರ್ಮಿಕರ ಗಮನ ಪ್ರಯಾಣಿಕರತ್ತ ವಾಲಿತ್ತು. ಸಾಂಬಾರ್ ಕೊಡಿ ಅಂತಾ ೩-೪ ಬಾರಿ ಕೇಳಿದ ಮೇಲೆಯೇ ಬಂತು ನೋಡಿ. ಒಟ್ಟಿನಲ್ಲಿ ಈ ಬಸ್ಸು ನಿಲ್ಲಿಸುವ ಹೋಟೆಲ್ ಅಲ್ಲಿ ಎಂದೂ ಕಾಲಿಡಬೇಡಿ ಮಾರಾಯ್ರೇ!

ಮತ್ತೆ ವಿಷಯಕ್ಕೆ ಬರೋಣ :-).

ಸನ್ನಿವೇಶ - ೧

ಯಡಿಯೂರಿನ ಬಳಿಕ ಹದ್ದಿನಕಲ್ಲು ತಲುಪಲು ಸ್ವಾಗತ ಕಮಾನು ಸಿಗುವುದೆಂದು ನನಗೆ ತಿಳಿದಿತ್ತು. ಆದರೂ ಮ್ಯಾಪ್ ಚಾಲು ಮಾಡಿದೆ. ಅಲ್ಲಿಯೇ ನೋಡಿ ಗ್ರಹಚಾರ ಶುರು ಆಗಿದ್ದ. ಸ್ವಾಗತ ಕಮಾನು ದಾರಿಯ ಬದಲು ಮ್ಯಾಪ್ ಟಿ.ನರಸೀಪುರ-ಶಿರಾ ರಸ್ತೆಯ ಮೂಲಕ ದಾರಿ ತೋರಿಸಿತು. ಆ ರಸ್ತೆಯಲ್ಲಿ  ಎಲ್ಲೆಲ್ಲೋ ಕರೆದುಕೊಂಡು ಹೋಯಿತು. ಸುಮಾರು ೪-೫ ಅಡ್ಡ ದಾರಿಗಳು, ಸಣ್ಣ ರಸ್ತೆಗಳು ಜೊತೆಗೆ ಹಳ್ಳಿಯ ಗಲ್ಲಿ ರಸ್ತೆಗಳು! ಅಲ್ಲಿ ಕಾರ್ ಹೋಗುವುದು ಸಾಧ್ಯವಾಗಲಿಲ್ಲ! ಕೊನೆಗೆ ವಿಧಿಯಿಲ್ಲದೇ ಹಳ್ಳಿ ಜನರನ್ನು ಕೇಳಿದಾಗ, ಅವರು ಸರಿಯಾದ ದಾರಿ ತೋರಿಸಿದರು. ನೋಡಿ ಮ್ಯಾಪ್ ದಾರಿ. ಈಗಲೂ ಇದೇ ದಾರಿ ತೋರಿಸುತ್ತಿದೆ.


ಹದ್ದಿನಕಲ್ಲಿನಲ್ಲಿ ಶ್ರಾವಣ ಶನಿವಾರದ ನಿಮಿತ್ತ ಜನಜಾತ್ರೆಯೇ ಸೇರಿತ್ತು. ಹಲವು ಮಂದಿ ಬೆಟ್ಟ ಹತ್ತಿ ಆಂಜನೇಯನ ದರ್ಶನ ಪಡೆಯುತ್ತಿದ್ದರು. ನಾವು ಕೂಡಾ ಬರಿಗಾಲಿನಲ್ಲಿ ಬೆಟ್ಟ ಹತ್ತಿ ಆಂಜನೇಯನ ಆಶೀರ್ವಾದ ಪಡೆದು ಧನ್ಯರಾದೆವು. 

ವಾಪಸ್ ಬಂದಾಗ ಶ್ರವಣಬೆಳಗೊಳಕ್ಕೆ ಮ್ಯಾಪ್ ಹಾಕಿದೆ. ಈಗ ಮ್ಯಾಪ್ ಸ್ವಾಗತ ಕಮಾನು ದಾರಿ ತೋರಿಸಿತು. ಆದರೆ ದಾರಿ ಮಧ್ಯೆ ಮತ್ತೆ ಮಣ್ಣಿನ ರಸ್ತೆಗೆ ತಿರುಗಲು ಹೇಳಿತು. ನನಗೆ ಸಂಶಯ ಬಂದು, ಅದರ ಸೂಚನೆಯನ್ನು ಧಿಕ್ಕರಿಸಿ ಉತ್ತಮ ರಸ್ತೆಯಲ್ಲಿ ಮುಂದುವರೆದೆನು. ಏನಾಶ್ಚರ್ಯ! ಮಂಗಳೂರು ರಸ್ತೆ ಬಳಿ ಇರುವ ಸ್ವಾಗತ ಕಮಾನಿಗೆ ಕೇವಲ ೧೦ ನಿಮಿಷದಲ್ಲಿ ಸಲೀಸಾಗಿ ತಲುಪಿದೆವು! ರಸ್ತೆ ಕೂಡಾ ಬೊಂಬಾಟ್! ಜೊತೆಗೆ ಹೆಚ್ಚು ಎಂದರೆ ೪ ಕಿ.ಮೀ ಅಷ್ಟೇ! ಗೊತ್ತಿದ್ದರೂ ಸುಮ್ಮನೆ ಮ್ಯಾಪ್ ಹಾಕಿದ್ದೆ ತಪ್ಪು ಆಯಿತು. ಭಾರತದ ಗ್ರಾಮೀಣ ಪ್ರದೇಶದಲ್ಲಿ ಒಂದೋ ಜನರ ಸಹಾಯ ಕೇಳಬೇಕು, ಗೊತ್ತಿದ್ದರೆ ನಾವೇ ಸಂಚರಿಸುವುದು ಒಳ್ಳೆಯದು ಎಂಬ ಪಾಠ ಗೂಗಲ್ ಮ್ಯಾಪ್ ಕಲಿಸಿತ್ತು!

ಇದು ನೋಡಿ ಸರಿಯಾದ ದಾರಿ. ರಸ್ತೆಯೂ ಸೂಪರ್ ಇದೆ. ಸುಮ್ಮನೆ (X) ದಾರಿಯಲ್ಲಿ ಸಂಚರಿಸಬೇಡಿ! 


ಆಶ್ಚರ್ಯವೆಂದರೆ, ಹದ್ದಿನಕಲ್ಲಿನಿಂದ ವಾಪಾಸ್ ಯಡಿಯೂರು ಬರಲು, ಮ್ಯಾಪ್ ಇದೇ ದಾರಿ ತೋರಿಸುತ್ತಿದೆ! ಮ್ಯಾಪ್ ಯಾಕೆ ಹೀಗೆ ಆಗಿದಿಯೋ?


ಆವಾಗ ತಟ್ಟನೆ ಒಂದು ಕಗ್ಗ ಬರೆದೆ (ಗ್ರಾಮೀಣ ಪ್ರದೇಶಕ್ಕೆ ಅನ್ವಯ)

ಊರ ಜನರ ಕಡೆಗಣಿಸಿ 

ಮ್ಯಾಪ್ ಹಾಕೊಂಡು ತಿರುಗಿದರೆ

ಕೆರೆಯೋ ಬಾವಿಯೊ (ಅಥವಾ ಕಣಿವೆಯೊ) ಗತಿ ಮ್ಯಾಪ್-ತಿಮ್ಮ!

ಪುಣ್ಯಕ್ಕೆ ಈ ಬಾರಿ ಕೆರೆ ಅಥವಾ ಕಣಿವೆಗೆ ದಾರಿ ತೋರಿಸಲಿಲ್ಲ.

ಸನ್ನಿವೇಶ - ೨

ಹದ್ದಿನಕಲ್ಲು ಆಂಜನೇಯನ ಆಶೀರ್ವಾದ ಪಡೆದು ವಾಪಸ್ ಬೆಂಗಳೂರಿಗೆ ಬಂದಾಗ ಸುಮ್ಮನೆ ನಾಗಸಂದ್ರದಿಂದ ಕೊಡಿಗೇಹಳ್ಳಿಗೆ ಮ್ಯಾಪ್ ಹಾಕಿ ಮತ್ತೆ ತಪ್ಪು ಮಾಡಿದೆ. ದಾರಿ ಗೊತಿದ್ದರೂ  ತಂತ್ರಜ್ಞಾನದ ಮೊರೆ ಹೋಗಿದ್ದೆ ತಪ್ಪಾಯಿತು ನೋಡಿ. ನನ್ನನ್ನು ನಾನೇ ಅಪನಂಬಿಕೆಯಿಂದ ನೋಡಿದೆನೋ ಅನ್ನಿಸುತ್ತಿತ್ತು. ಅಥವಾ ನಾವು ತಂತ್ರಜ್ಞಾನದ ದಾಸರಾಗಿದ್ದೇವೆಯೋ ನಾ ಕಾಣೆ. ಒಟ್ಟಿನಲ್ಲಿ ೭ಘಂಟೆಗೆ ನಾಗಸಂದ್ರಕ್ಕೆ ಬಂದವನು, ೮:೪೫ಕ್ಕೆ ಕೊಡಿಗೇಹಳ್ಳಿಗೆ ಮುಟ್ಟಿದೆನು. ಯಾಕಾದ್ರೂ ಮ್ಯಾಪ್ ಹಾಕಿದೆ ಅನ್ನಿಸಿತು!

ವಿಷಯ ಏನೆಂದರೆ, ಜಾಲಹಳ್ಳಿ ಎಲಿವೇಟೆಡ್ ಹೆದ್ದಾರಿ ಇನ್ನೇನು ಮುಗಿಯಬೇಕು ಅನ್ನುವಷ್ಟರಲ್ಲಿ, ಶುರು ಆಯಿತು ನೋಡಿ ಕೆಂಪು ದೀಪದ ದೀಪಾಲಂಕಾರ ಶೋ! ಎಲ್ಲೆಲ್ಲೂ ವಾಹನ, ಎಲ್ಲೆಲ್ಲೂ ವಾಹನ. ಗೊರಗುಂಟೆಪಾಳ್ಯ ಬರುವಷ್ಟರಲ್ಲಿ ಸುಮಾರು ೩೦ ನಿಮಿಷ ತಾಗಿರಬೇಕು. ಇಷ್ಟಕ್ಕೆ ಮುಗಿಯಿತೋ? ಇಲ್ಲ. ಮ್ಯಾಪ್ ಪ್ರಕಾರ ಹೆಬ್ಬಾಳವರೆಗೂ ಕೆಂಪು ಕೆಂಪು. ಯಾಕಾದರೂ ಈ ದಾರಿ ತೋರಿಸಿತೋ? ಮಾಮೂಲಿ HMT ರಸ್ತೆ ಮೂಲಕ ಹೋದರೆ ಹೆಚ್ಚು ಎಂದರೆ ಬಾಗಲುಗುಂಟೆ ಜಂಕ್ಸನ್ ಅಲ್ಲಿ ವಾಹನ ದಟ್ಟಣೆ ಇರುತ್ತಿತ್ತು. ಜಾಲಹಳ್ಳಿ ಕ್ರಾಸ್ ಅಲ್ಲಿ BMTC ಕೃಪೆ ಇಂದ ಟ್ರಾಫಿಕ್ ಇರುತ್ತಿತ್ತೇ ವಿನಹಾ ಅಂತಹ ಟ್ರಾಫಿಕ್ ಇರುತ್ತಿರಲಿಲ್ಲ. ಹೆಬ್ಬಾಳ ವರೆಗೆ ಸಲೀಸಾಗಿ ಬರಬಹುದಿತ್ತು. ಈಗ ನೋಡಿದರೆ ತೆವಳುತ್ತ ಸಾಗುತ್ತಿದ್ದೆವು. ಬಹುಶಃ ಹೆಬ್ಬಾಳ ಫೈ-ಓವರ್ ದಾಟಿದ ಮೇಲೆಯೇ ೪ನೇ ಗೇರಿಗೆ ಕಾರು ಓಡಿದ್ದು. ಟ್ರಾಫಿಕ್ ಮಧ್ಯೆ ತಾಳ್ಮೆ ಕಳೆದುಕೊಂಡ ವಾಹನ ಚಾಲಕನೊಬ್ಬ ನಮಗೆ ಯಾಕೆ ಬೈದನೆಂದೇ ತಿಳಿಯಲಿಲ್ಲ. ಎಲ್ಲೂ ಹೋಗಕ್ಕೆ ಆಗಲ್ಲ ಅದರ ಮಧ್ಯೆ ಯಾವ ಸಾಹಸದಿಂದ ಇದನ್ನು ಭೇಧಿಸಬಹುದೆಂದು ಬಹುಷಃ ಆ ತಾಳ್ಮೆ ಕಳೆದುಕೊಂಡ ಚಾಲಕನಲ್ಲಿ ಕೇಳಬಹುದು. ಇರಲಿ, ಅದನ್ನು ಹೆಚ್ಚು ತಲೆಗೆ ಹಾಕಿಕೊಳ್ಳಲಿಲ್ಲ. 

ಮುಂದುವರೆಸುತ್ತ, ಅರೆರೆ ಗೋರುಗುಂಟೆಪಾಳ್ಯ ರಿಂಗ್-ರೋಡ್ ಬಂದ್ ಆಗಿದೆ. ಏನಕ್ಕೆ ಗೊತ್ತಿಲ್ಲ. ಯಶವಂತಪುರವೇ ಗತಿ. ಎಲ್ಲೆಲ್ಲೂ ಟ್ರಾಫಿಕ್ ಜೊತೆಗೆ ಅರೆಬೆಂದ ಕಾಮಗಾರಿಗಳು. ಕಾಲು, ಕ್ಲಚ್-ಬ್ರೇಕ್ ಮೇಲೆಯೇ ಇತ್ತು. ಕೈ, ಗೇರ್ ಮೇಲೆಯೇ ಇತ್ತು. ಸಾಕಾಗಿ ಹೋಯಿತು. ಏರು ರಸ್ತೆಯಲ್ಲಿ ಪೆಟ್ರೋಲ್ ಕಾರಿನ ಕ್ಲಚ್ ಬಾಲೆನ್ಸ್ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಸ್ವಲ್ಪ ಕ್ಲಚ್ ತಪ್ಪಿ ಹೋದರೆ ಗಾಡಿ ಬಂದ್ ಬಿದ್ದರೆ ಮತ್ತೆ ಗೊತ್ತಿದೆ ಅಲ್ಲವೇ. ಹಿಂದಿರುವವರು ಯಗ್ಗಾ-ಮಗ್ಗ ಹಾರ್ನ್ ಮಾಡಿ ಬೈದು ಬಿಡುವರು. ಗಾಡಿ ಹಿಂದಕ್ಕೆ ಹೋದರೆ ಹಿಂದಿನ ಗಾಡಿಗೆ ತಾಗುವ ಭಯ. ತಾಗಿದರೆ ಟ್ರಾಫಿಕ್ ಜಾಮ್ ಮಧ್ಯೆಯೇ ಜಗಳ ಕಾಯುವ ಜನ. ಅಬ್ಬಬ್ಬಾ ಈ ಬೆಂಗಳೂರು ಸಹವಾಸವೇ ಬೇಡ. permanent WFH ಕೊಟ್ಟರೆ ಊರಕಡೆ ಹೊರಟು ಹೋಗುತ್ತೇವೆ ಮಾರಾಯ್ರೇ. ಸುಮ್ಮನೆ ರಿಯಲ್-ಎಸ್ಟೇಟ್, ರಾಜಕಾರಣಿಗಳ ದಂಧೆಯ ಮಧ್ಯೆಯೇ ನಾವು ಸಿಕ್ಕಿ ಹಾಕಿಕೊಂಡಿದ್ದೇವೆ ಅನ್ನುವುದು ಮೇಲ್ನೋಟಕ್ಕೆ ಸ್ಪಷ್ಟ. ನಗರ ಬೆಳೆದಂತೆ ಅದಕ್ಕೆ ಬೇಕಿರುವ ಸೌಕರ್ಯಗಳು ಮಾತ್ರ ಹಾಗೆಯೇ ಉದ್ಧಾರವಾಗದೆ ಇದೆ. ನಮ್ಮಂತ ಸಾಮಾನ್ಯ ಜನರ ಬಳಿ ಟ್ಯಾಕ್ಸ್ ತೆಗೆದುಕೊಂಡು ಯಾರ ಹೊಟ್ಟೆ ತುಂಬಿಸ್ತಾ ಇದಾರೋ ಆ ಆಂಜನೇಯನೇ ಬಲ್ಲ. ಏನು ಮಾಡುವುದು, ಎಲ್ಲಾ ನಮ್ಮ ಗ್ರಹಚಾರ ಅಂದು ಸುಮ್ಮನಾಗುವುದು ಒಳಿತು.

ನಡೆದು ಹೋಗಿದ್ದರೆ ಬೇಗ ತಲುಪಬಹುದಿತ್ತು ಅಂತಾ ಮಡದಿ ಹೇಳುತ್ತಿದ್ದಳು. ಯಶವಂತಪುರ ಫೈ-ಓವರ್ ಬಳಿಯ ಅಪಾರ್ಟ್ಮೆಂಟನ್ನು ನೋಡಿದಾಗ ಟ್ರಾಫಿಕ್-ಜಾಮ್ ವ್ಯೂ ಅಪಾರ್ಟ್-ಮೆಮೆಂಟ್ ಅಂತಾ ಮರು ನಾಮಕರಣ ಮಾಡಬಹುದೇನೋ :-D. ಇಂತಹ ಹಲವು ಹಾಸ್ಯ ಚಟಾಕಿಗಳನ್ನು ಹಾರಿಸಿ, ಕಷ್ಟದ ಮಧ್ಯೆ ಸುಖವನ್ನು ಕಂಡೆವು. ಮೇಖ್ರಿ ವೃತ್ತದ ಬಳಿಕ ಮತ್ತೆ ಜಾಮ್! ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಎಲ್ಲಾ ಬಸ್ಸುಗಳ ಆಶೀರ್ವಾದದಿಂದ. ಎಲ್ಲಾ ತರಹದ ಬಸ್ಸುಗಳು ಇಲ್ಲಿ ಯದ್ವಾ ತದ್ವ ಓಡಿಸಿ ಸುಮ್ಮನೆ ವಾಹನ ದಟ್ಟಣೆ ಸೃಷ್ಟಿಸುತ್ತವೆ. ಕಡೆಗೆ ಪೊಲೀಸ್ ಬಂದು ಬಸ್ಸುಗಳನ್ನು ನಿಯಂತ್ರಿಸಿ ಮುಖ್ಯ ರಸ್ತೆಯ ದಟ್ಟಣೆಯನ್ನು ಸುಗಮಗೊಳಿಸಿದರು.


ಇಂತಹ ಟ್ರಾಫಿಕ್ ಜಾಮ್ ಕಾಣೆನೋ ಈ ಜಗದಲ್ಲಿ ಇಂತಹ ಟ್ರಾಫಿಕ್ ಜಾಮ್ ಕಾಣೆನೋ 

ವಾಹನ ಶಬ್ದ ಜೊತೆಗೆ ಜನರ ಬೈಗುಳ ಜೊತೆಗೆ ಚಿಂದಿ-ಚಿತ್ರಾನ್ನ ರಸ್ತೆ,

ಕೊನೆಗೆ ಕಾಲು ನೋವು ಕ್ಲಚ್ಚು ಒತ್ತಿ!

ಇವತ್ತು ಮ್ಯಾಪ್ ಇಂದ ಪಟ್ಟ ಕಷ್ಟ ಅಷ್ಟಿಷ್ಟಲ್ಲ :-(. ೨ ಘಂಟೆ ದೀರ್ಘ ಯುದ್ಧಧ ಬಳಿಕ ಸೂರು  ಸೇರಿದೆವು. ಇನ್ನೆಂದೂ ಗೊತ್ತಿರುವ ಮಾರ್ಗದಲ್ಲಿ ಮ್ಯಾಪ್ ಅನ್ನು ಅನುಕರಿಸುವುದಿಲ್ಲ ಮಾರಾಯ್ರೇ. ಹಾಗೆ ಒಂದು ಕಗ್ಗ, ಥಟ್ ಅಂತಾ ತಲೆಗೆ ಹೊಳೆಯಿತು.


ತಿಳಿದ ಮಾರ್ಗವ ತೊರೆದು 

ಮಾಪ್ ದಾರಿ ಅರಸು (ಅಥವಾ ತಂತ್ರಜ್ಞಾನದ ದಾರಿ)

ಟ್ರಾಫಿಕ್ ಜಾಮ್ ಸವಿಯಲು ಇದೆ ದಾರಿ ಮಂಕುಬೂದಿಯೇ!

ಸಮಯ ಉಳಿಸುದಕ್ಕಿಂತ, ನೆಮ್ಮದಿಯ ರಸ್ತೆಯ ತೋರಿಸಯ್ಯ ಗೂಗಲ್ ಮ್ಯಾಪಯ್ಯಾ! ಗುಂಡಿ, ನೀರು ತೋರಿಸಿ, ನಮ್ಮ ಬೆನ್ನು ಮುರಿಯಬೇಡಯ್ಯಾ!

ಕೊನೆಯದಾಗಿ: ಆಗೋದೆಲ್ಲ ಒಳ್ಳೆಯದಕ್ಕೆ ಆಯಿತು!

ದೇವರಲ್ಲಿ ನಂಬಿಕೆ ಇಟ್ಟರೆ ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋದು ನಿಜ. ಹದ್ದಿನಕಲ್ಲಿಗೆ ಯೋಜನೆ ಹಾಕಿದ್ದರೂ ೨ ವಾರದ ಹಿಂದೆ ಮಕ್ಕಳ ಅನಾರೋಗ್ಯದಿಂದ ಸಂಚರಿಸಲು ಆಗಲಿಲ್ಲವೆನ್ನುವುದಕ್ಕೆ ಬಹಳ ಬೇಸರ ಇತ್ತು. ಆಗ ಬಹಳ ಮಳೆಯೂ ಇತ್ತು ಜೊತೆಗೆ ಬಲವಾದ ಮುಂಗಾರು ಗಾಳಿ ಬೀಸುತ್ತಿತ್ತು. ಇಂದು ಹದ್ದಿನಕಲ್ಲಿಗೆ ಬಂದಾಗಲೇ ತಿಳಿದದ್ದು ಆಗ ಬೆಟ್ಟ ಪೂರ್ತಿ ಗಿಡಗಂಟೆಗಳಿಂದ ತುಂಬಿತ್ತು ಎಂದು! ಶ್ರಾವಣ ಮಾಸದ ಪ್ರಯುಕ್ತ ಬೆಟ್ಟ ಪೂರ್ತಿ ಶುಚಿ ಮಾಡಿ ಜನಗಳಿಗೆ ಹತ್ತಲು ಅನುಕೂಲ ಮಾಡಿದ್ದಾರೆ. ಜೊತೆಗೆ ಮಳೆ-ಗಾಳಿಯ ಮಧ್ಯೆ ಬೆಟ್ಟ ಹತ್ತುವುದು ಅಸಾಧ್ಯದ ಮಾತು! ಏಕೆಂದರೆ ಜಾರುವ ಕಲ್ಲು ಮತ್ತೆ ಕೆಲವೊಮ್ಮೆ ಕಡಿದಾದ ಮಾರ್ಗ. ಮಕ್ಕಳನ್ನು ಕರೆದುಕೊಂಡು ಕೆಳಗಿಳಿಯುವುದು ಬಹು ಕಷ್ಟ! ಅದಕ್ಕೆ ಇರಬೇಕು ಹನುಮಂತ ರಾಯರು ನಮ್ಮ ಯೋಜನೆಯನ್ನು ಮುಂದೂಡಿದ್ದು! ಇಂದು ದಾರಿ ಕೂಡಾ ಸುಗಮವಾಗಿತ್ತು ಜೊತೆಗೆ ಬಿಸಿಲು-ಮೋಡದ ಜುಗಲ್-ಬಂದಿ, ಬೆಟ್ಟ ಹತ್ತುವುದನ್ನು ಸುಗಮವಾಗಿಸಿತ್ತು. ಗಾಳಿ ಕೂಡಾ ಅಷ್ಟೇನೂ ಬಿಸುತ್ತಿರಲಿಲ್ಲ, ಜೊತೆಗೆ ಶ್ರಾವಣ ಶನಿವಾರದ ಶುಭದಿನ ಬೇರೆ. ಎಲ್ಲವು ಒಳ್ಳೆಯದಾಗಿದಕ್ಕೆ ಶ್ರೀ ಆಂಜನೇಯ ದೇವರಿಗೆ ಧನ್ಯವಾದವನ್ನು ಸಲ್ಲಿಸಿದೆ.

ಬುದ್ಧಿರ್ಬಲಂ ಯಶೋಧರ್ಯಂ ನಿರ್ಭಯತ್ವಂ ಅರೋಗತ।

ಅಜಾಡ್ಯಮ್ ವಾಕ್ಪಟುತ್ವಂಚ ಹನುಮತ್ ಸ್ಮರಣಾತ್ ಭವೇತ್|| 

ಬಲ, ಅರೋಗ, ಅಜಾಡ್ಯ ಬೇಕೆಂದರೆ ಸದಾ ಚಟುವಟಿಕೆಯಿಂದ ಕೂಡಿರಬೇಕು. ದೇಹ ದಂಡನೆಯಿಲ್ಲದೆ ಆರೋಗ್ಯವನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಮಕ್ಕಳು, ದೊಡ್ಡವರು, ಮುದುಕರು ಎಂಬ ಭೇದವಿಲ್ಲದೆ ಎಲ್ಲರೂ ಬೆಟ್ಟ ಹತ್ತಿ ದೇವರ ದರ್ಶನ ಮಾಡುತ್ತಿದ್ದರು. ಹುಟ್ಟಿದ ಕೂಸನ್ನು ಕರೆದುಕೊಂಡು ಬಂದು ತಮ್ಮ ಸೇವೆಯನ್ನು ಸಮರ್ಪಿಸುತ್ತಿದ್ದರು. ತುಂಬಾ ಸುಸ್ತಾಗಿ ವಾಪಾಸ್ ಹೋಗಬಯುಸುವವರಿಗೆ, ಅವರ ಹತ್ತಿರದವರು "ಇಷ್ಟೊಂದು ದೂರ ಬಂದು ದೇವರ ನೋಡಿಕೊಂಡು ಹೋಗಾವಾ! ಆಂಜನೇಯ ಸ್ಮರಿಸು, ಅವನೇ ಬೆಟ್ಟ ಹತ್ತಲು ಶಕ್ತಿ ಕೊಡ್ತಾನೆ" ಎಂಬ ಧೃಢ ನಂಬಿಕೆಯಿಂದ ಹುರಿದುಂಬಿಸುತ್ತಿದ್ದರು. ನಮಗೂ ಅವರ ಮಾತುಗಳು ಪ್ರೇರಣೆಯಾಗುತ್ತಿದ್ದವು. ಅದಕ್ಕಾಗಿಯೇ ಹದ್ದಿನಕಲ್ಲಿನ ಆಂಜನೇಯ ಬೆಟ್ಟ ಹತ್ತಿ ಬನ್ನಿ ಅಂತ ಭಕ್ತರನ್ನು ಆರೋಗ್ಯ ದೃಷ್ಟಿಯಿಂದ ಕರೆಯುವಂತಿದೆ. ಜೊತೆಗೆ ಮನೆ ಸೇರುವ ಹೊತ್ತಿಗೆ ತಾಳ್ಮೆ ಎಂಬುವ ಪಾಠವನ್ನು ಹೇಳಿಕೊಟ್ಟಂತಿದೆ. ಶ್ರೀ ಕ್ಷೇತ್ರಕ್ಕೆ ನೀವು ಹೋಗಿ ಬನ್ನಿ. ಶ್ರಾವಣ ಶನಿವಾರ ಒಳ್ಳೆಯ ಸಮಯ. ಜನಜಂಗುಳಿ ಇದ್ದರೂ, ಸಾರ್ಥಕತೆಯ ಭಾವ ಇರುವುದು. ಜೊತೆಗೆ ಮಳೆಗಾಲದ ಸುಂದರ ಪ್ರಕೃತಿಯನ್ನು ಸವಿಯಬಹುದು. 

ಹದ್ದಿನಕಲ್ಲು ಶ್ರೀ ಆಂಜನೇಯ ಸ್ವಾಮಿಯ ದರುಶನ ಮಾಡಿ.

ವೀರ ಹನುಮ ಬಹು ಪರಾಕ್ರಮ 
ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ

ನಿಮಗಾಗಿ ದೇವರ ಮಂಗಳಾರತಿಯ ವಿಡಿಯೋ. ಸಮಯ ಸಿಕ್ಕಾಗ ಪೂರ್ತಿ ವಿಡಿಯೋ ಅಪ್-ಲೋಡ್ ಮಾಡುವೆ.

Tuesday, August 9, 2022

ಚಾಮುಂಡಿ ಬೆಟ್ಟದಲ್ಲಿ ಲಡ್ಡು ಗೋಲ್ಮಾಲ್

೦೫ ಆಗಸ್ಟ್ ೨೦೨೨,

ಬಹಳ ವರ್ಷಗಳ ಬಳಿಕ ಮತ್ತೆ ಮೈಸೂರು ಸುತ್ತಾಡುವ ಅವಕಾಶ ಒದಗಿ ಬಂದಿತು. ಕುಟುಂಬದವರೊಂದಿಗೆ ಮೂರು ದಿನಗಳ ಕಾಲ ಖುಷಿಯಿಂದ ಮೈಸೂರು ಸುತ್ತಾಡಿದೆವು. ಆಗಾಗ ಜಿಟಿಜಿಟಿ ಹಾಗು ಕೆಲವೊಮ್ಮೆ ಜೋರು ಮಳೆ ಸುರಿದರೂ, ನಾವು ತಿರುಗಾಡುವ ಸಮಯದಲ್ಲಿ ಮಳೆರಾಯ ಬಿಡುವು ನೀಡು ನಮ್ಮ ಪ್ರವಾಸಕ್ಕೆ ಸಹಕರಿಸಿದನು :-).

ಅಂತೆಯೇ ಮೊದಲ ದಿನ ಶುಕ್ರವಾರದಂದು (ವರಮಹಾಲಕ್ಷ್ಮೀ ಪುಣ್ಯದಿನ ಬೇರೆ), ಚಾಮುಂಡಿ ಬೆಟ್ಟ ನಮ್ಮ ಮೊದಲ ಗುರಿಯಾಗಿತ್ತು. ತಾಯಿ ಚಾಮುಂಡಿಯನ್ನು ಕಂಡು ಸುಮಾರು ೧೦ ವರ್ಷವೇ ಆಗಿರಬೇಕು. ಇಂದು ಶುಭದಿನದಂದು ಆ ಅವಕಾಶ ಒದಗಿ ಬಂದಿದ್ದು ನಮ್ಮ ಪುಣ್ಯ. ಅಷ್ಟೇನು ಜನಜಂಗುಳಿ ಇರಲಿಲ್ಲ. ಮಲೆನಾಡಿನಲ್ಲಿ ಮುಂಗಾರು ಬಿರುಸು ಪಡೆದರೆ, ಬಯಲುಸೀಮೆಯಲ್ಲಿ ಜೋರು ಗಾಳಿ ಜೊತೆಗೆ ಜಿಟಿಜಿಟಿ ಮಳೆ ಸಾಥ್ ನೀಡುವುದು ಸಾಮಾನ್ಯ. ಗಾಳಿ ಬಹಳ ಬಿರುಸಾಗಿಯೂ ಜೊತೆಗೆ ತಣ್ಣನೆ ಬೀಸುತ್ತಿತ್ತು. ಕೋತಿಗಳ ಕಾಟದ ಮಧ್ಯೆ, ಜನರ ನೂಕುನುಗ್ಗಲಿನ ನಡುವೆ, ೩೦ ನಿಮಿಷದ ಒಳಗೆ ದೇವಿಯ ದರ್ಶನ ಮುಗಿಸಿದೆವು. ತಾಯಿಯನ್ನು ಕಂಡು ಮನಸ್ಸು ಕೂಡಾ ಹಗುರವಾಗಿ ಸಂತೋಷವಾಯಿತು. ತಾಯಿಯ ಕೃಪೆಯಿಂದ ನಮ್ಮ ದರ್ಶನದ ಬಳಿಕವೇ ಮಳೆ ಸುರಿಯಲಾರಂಭಿಸಿತು. 

ಪ್ರತಿ ಪುಣ್ಯ ಕ್ಷೇತ್ರ ದರ್ಶನದ ಬಳಿಕ, ಅಲ್ಲಿಯ ಲಾಡು ಕೊಳ್ಳುವ ಅಭ್ಯಾಸ ನನಗೆ. ಚಾಮುಂಡಿ ಬೆಟ್ಟದಲ್ಲೂ ಅದೇ ಅಭ್ಯಾಸ ಮುಂದುವರೆಸಿದೆ.  ದೇವಸ್ಥಾನದ ಒಳಗಡೆ ೨ ಲಡ್ಡುವಿಗೆ ೩೦ ರೂಪಾಯಿ ನಿಗದಿಪಡಿಸಿದ್ದರು. ಮಂಗಗಳ ಕಾಟದಿಂದ ನಾನು ಹೊರಗೆ ಖರೀದಿಸಲು ನಿರ್ಧರಿಸಿದೆ. ದೇವಸ್ಥಾನದ ಆವರಣದಿಂದ ಹೊರಬಂದ ನಂತರ, ಲಡ್ಡು ಕೌಂಟರ್ ನಲ್ಲಿ ಲಡ್ಡು ತೆಗೆದುಕೊಳ್ಳಲು ಹೋದೆವು. ಅಲ್ಲಿ ೩ ಲಡ್ಡುವಿಗೆ ೫೦ ರೂಪಾಯಿ ಎಂದು ಹೇಳಿದನು. ನಾನು ಎರಡು ಸಾಕು ಎಂದಾಗ, "ಚೆಂಜ್ ಇಲ್ಲ, ಮೂರು ತಗೋಬೇಕು" ಅಂತಾ ಪಟ್ಟುಹಿಡಿದನು. ನಾನು ವಿಧಿಯಿಲ್ಲದೇ ೫ ರೂಪಾಯಿ ಅಧಿಕ ಶುಲ್ಕ ನೀಡಿ ಖರೀದಿಸಿದೆ.



ದೇವರ ಹೆಸರಲ್ಲಿ ಎಂತಹ ಗೋಲ್ಮಾಲ್ ನೋಡಿ. ಚೇಂಜ್ ಇಲ್ಲ ಅಂತಾ ಸುಲಿಗೆ ಮಾಡೋದಾ. ಇಂದಿನ  ಮೊಬೈಲ್ ಪೇಮೆಂಟ್ ಯುಗದಲ್ಲಿ "ಚೇಂಜ್ ಇಲ್ಲ" ಅನ್ನೋ ಪದವನ್ನೇ ಕೇಳದೆ ಬಹು ವರ್ಷಗಳಾಗಿವೆ. ಸರಕಾರಿ ಯಂತ್ರಗಳೇ ಈ ರೀತಿ ಹೇಳಿದರೆ ಹೇಗೆ.  ಮತ್ತೊಂದು ಮಾತು ಏನೆಂದರೆ, ವಿಶೇಷ ದರ್ಶನದ ಟಿಕೆಟ್ ಪಡೆದವರಿಗೆ ಹೊರಗಡೆ ಲಾಡು ವಿತರಿಸಲಾಗುತ್ತದೆ. ಇಲ್ಲಿ ಹಾಗೆಯೇ ಕೊಳ್ಳುವವರಿಗೆ ಇರುವ ಕೌಂಟರ್ ಅಲ್ಲ ಅಂದುಕೊಳ್ಳುತ್ತೇನೆ. ಏಕೆಂದರೆ ನನಗೆ ಅವನು ಬಿಲ್ ಕೊಡಲಿಲ್ಲ. ಅಂದರೆ ಈ ದುಡ್ಡು ಅವನ ಅಕೌಂಟ್ ಗೆ ಸೇರುತ್ತದೆಯೇನೋ? ಇರಲಿ ಒಟ್ಟಿನಲ್ಲಿ ಎಲ್ಲಾ ಸುಲಿಗೆ. ನಮ್ಮಂತ ಸಾಮಾನ್ಯ ಜನರು ದೇವಸ್ಥಾನದಲ್ಲಿ ಯಾಕೆ ವಾದ-ವಿವಾದ ಅಂತಾ ಸುಮ್ಮನಿರುತ್ತೇವೆ. ಅದಕ್ಕೆ ಸರಿಯಾಗಿ ಲಾಡು ವಿತರಿಸುವವ ಕೂಡಾ "ಬೇಕಾದ್ರೆ ತಗೊಳ್ಳಿ ಇಲ್ಲಾಂದ್ರೆ ಹೋಗ್ರಿ" ಅಂತಾ ಸಿಟ್ಟಿನಲ್ಲಿ ಉಡಾಫೆಯಿಂದ ಉತ್ತರಿಸುತ್ತಾರೆ. ಇಂತಹ ಹಲವು ಒರಟು ನುಡಿಗಳನ್ನು ಬೆಳಗ್ಗಿಯಿಂದ ಕೇಳಿದ್ದೆ. ಇರಲಿ ಬಿಡಿ ಅದೊಂದು ಬೇರೆಯೇ ಕಥೆ. ಟ್ಯಾಕ್ಸ್ ದುಡ್ಡಿನಲ್ಲಿ ಸರಕಾರ ಸೌಕರ್ಯಗಳನ್ನು ನೀಡುತ್ತವೆ. ಅದನ್ನೇ ಬಂಡವಾಳವಾಗಿ ಇಟ್ಟುಕೊಂಡು ಈತರ ಹಗಲು ಸುಲಿಗೆ ಮಾಡುತ್ತಾರೆ. ನಿಯತ್ತಿನ್ನಲಿ ಟ್ಯಾಕ್ಸ್ ಕಟ್ಟುವವರ ಪಾಡು ಇಷ್ಟೇ ಅಂತಾ ನಾನು ಸುಮ್ಮನೆ ಮೈಸೂರು ಕಡೆ ಪ್ರಯಾಣ ಬೆಳೆಸಿದೆ. 

ಒಟ್ಟಿನಲ್ಲಿ ಗೋಲ್ ಗೋಲ್ ಲಡ್ಡು ಮಾರಾಟದಲ್ಲಿ ದೊಡ್ಡ ಗೋಲ್ಮಾಲ್ ನಡೆಯುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ತಾಯಿ ಚಾಮುಂಡಿ ನೀನೇ ಕಾಪಾಡಬೇಕು.

ಈ ಬ್ಲಾಗ್ ವೀಕ್ಷಿಸಿದವರಾದರೂ ಜಾಗೃತರಾಗಿ, ಮೋಸಹೋಗಬೇಡಿ!

Sunday, July 24, 2022

Savoring Kalladka Tea (KTea) at Lakshmi Nivas, Kalladka

To begin with, the retro Lakshmi Nivas is demolished to accommodate NH-75 expansion through Kalladka town. The path to hotel is full of construction materials which is slippery and muddy. The hotel administrators have aptly covered the entrance with dust prevention nets to prevent the flying mud from half baked highway. Follow the google maps to reach the newly constructed hotel comfortably.



After our exciting visit to Narahari Parvata, we stopped at Lakshmi Nivas to consume lunch. The prime intention was to taste Kalladka Tea, prominently expressed as KTea. Specialty of tea is 3 layered composition of thick milk (bottom), tea-decoction (middle) and milk froth (top) with varied proportion. It is not as simple as it looks in picture. Lot of calculations are needed to perfectly keep these three things apart and look like tri-layered beverage. As of now, instead of dwelling on details, here is a short picture for my record.


Post a disappointing meal, we had this extraordinary tea on our tables. It is quite unusual to have tea post meals. We consumed this time exclusively to taste the unique tea of India. Once it arrived, we took couple of photographs before blending them to single layer. The taste was fantastic and the sugar was perfect. So its not only the look of tea, the beauty lies in taste as well. If you are passing through Kalladka town during morning hours, do not forget to sip this elegant tea!

Monday, July 18, 2022

Delta Beach - Kodi Bengre, Udupi District

Similar to the Someshwara beach near Bynduru, the specialty of beach is estuary situated nearby. The Swarna river merges with Arabian sea here. One of the majestic scene to watch especially during golden hour. A short drive of about 10kms from Malpe beach through narrow rural roads running parallel to Arabian sea, leads you to this beach. The beach can also be reached via Santekatte junction at National Highway - 66 which is convenient way. But if you wish to rejoice Arabian sea from Malpe to Delta beach, I would suggest you to take Malpe-KodiBengre road though it takes tad longer time. Along Malpe-KodiBengre route, one can visit Hoode and Gujjarbettu beach if you love birdwatching where plenty of migrant birds can be spotted during winter.


The alluring part is the flamboyant nature that ornate the region. It was enticing to watch the river meeting the sea with terns & gulls accompanying with joy. It is heart-warming to watch the gulls & terns flying over estuary with zest further disappearing to invisible golden horizon. Yes, there are lot of birds to photograph here apart from enjoying blissful nature. I saw common raptors (but could not spot white bellied sea-eagle yet), terns, gulls and reef heron. Perhaps kingfishers would be too active hunting along calm backwaters. 

Downsides:

The kodi-bengre beach does not seem to be officially developed tourist spot. There are no walkways to reach the beach. One has to cross the sea walls to enjoy in beach. This is quite tough for people who find it difficult to climb (my father had tough time). Finally, we saw an open path between houses to reach the sand floor of the beach. There are snack shops here but no official parking spots. The roads are concreted which means no ground clearance between road and the sideways. The bumper of small cars take a hit badly, so be careful while parking car. Also, coconuts may fall at any point of time which is another risk :-).

The biggest menace is the unprecedented trashing. Lack of trash-bins and cleaning has hit badly on the sanity of beach. It is disheartening that educated people fail to carry the trash back in case of absence of dust-bins. Request to visitors not to spoil the sanctity of nature. If you cannot carry trash back in your car, dump in dustbins of snack shops at least.

Here is short video of our visit. My toddlers enjoyed whole-heartedly on this day at kodi-bengre beach soaking entire body almost!

Thursday, February 10, 2022

ಗೂಗಲ್ ಟೈಮ್ ಗಮ್ಮತ್ತು, ಜಿಲೇಬಿಗೆ ಕುತ್ತು

ರಾತ್ರಿ ಊಟದ ನಂತರ ಗುಂಡ ಮತ್ತು ನಿಂಗಿ ಎಂದಿನಂತೆ ಹರಟೆಗೆ ಮನೆಯ ಹೊರಗಡೆ ಕುಳಿತುಕೊಂಡರು. ಹೆಚ್ಚಾಗಿ  ೯ ರಿಂದ ೧೦ ರವರೆಗೆ ನಡೆಯುತ್ತೆ ಇವರ ಹರಟೆ. ಒಂದು ತರಹದ single-sided talk ಅಂದ್ರೂ ತಪ್ಪಾಗಲಾರದು. ನಿಂಗಿ ಮಾತನ್ನು ಅರಗಿಸಿ, ಕರಗಿಸಿಕೊಳ್ಳುವಷ್ಟರಲ್ಲಿ ಗುಂಡನಿಗೆ ಕೆಲವೊಮ್ಮೆ ತೂಕಡಿಕೆ ಬರುವುದು ಉಂಟು. ಆದರೂ ಅರ್ಧಾಂಗಿ ಅಲ್ಲವೇ! ಸಹಿಸಿಕೊಳ್ಳಬೇಕು ೧೦ ರ ವರೆಗೆ.

ಅದೊಂದು ದಿನ ಹರಟೆ ಹಾಗೆ ನಡಿತಾ ಇತ್ತು. ದಿನಪೂರ್ತಿ ನಡೆದ ಘಟನೆಗಳನ್ನು ನಿಂಗಿ ಉದುರುತ್ತಲೇ ಇದ್ದಳು. ಗುಂಡನಿಗೆ ಇಷ್ಟೊಂದು ಆಕಳಿಕೆ ಇದುವರೆಗೆ ಬಂದಿಲ್ಲವೇನೋ! ಬಹುಶಃ ಆಕಳಿಕೆ ಸ್ಪರ್ಧೆ ಇದ್ದಾರೆ ಬಹುಮಾನ ಬರುತ್ತಿತ್ತು ಗುಂಡನಿಗೆ.

೧೦ಕ್ಕೆ ಇನ್ನೇನು ಹತ್ತಿ ನಿಮಿಷ ಇರುವಾಗ ಗುಂಡ ನಿಂಗಿಗೆ "ನಡೆ ಮಲಗಲು ತೆರಳೋಣ ಅಂತ" ತಾಕೀತು ಮಾಡಿದನು.

ನಿಂಗಿ ಮಾತನ್ನು ನಿಲ್ಲಿಸಿ, ಮೊಬೈಲ್ ಮೇಲೆ ಕಣ್ಣಾಡಿಸಿದಳು. ಸುಮಾರು ೫ ನಿಮಿಷ  ಆಗಿರಬೇಕು, "ಅಲ್ಲವೇ ನಿದ್ರೆಗಿಂತ ಒಂದು ಗಂಟೆ ಮುಂಚೆ ಮೊಬೈಲ್ ನೋಡಬೇಡಿ ಅಂತಾ ಹೇಳಿದ್ದಲ್ಲ? ಯಾಕೆ ನೋಡ್ತಾ ಇದ್ದೀಯ" ಅಂತಾ ಗುಂಡ ಮೊಬೈಲ್ ಮುಚ್ಚಿಡಲು ನಿಂಗಿಗೆ ಹೇಳಿದನು. "ಏನಿಲ್ಲ ರೀ ಟೈಮ್ ಎಷ್ಟು ಅಂತಾ confirm ಮಾಡಕ್ಕೆ ಮೊಬೈಲ್ ಸ್ವಲ್ಪ ಓಪನ್ ಮಾಡಿದೆ ಅಷ್ಟೇ" ಅಂತಾ ನಿಂಗಿ ಮಾರುತ್ತರ ನೀಡಿದಳು. 

"ಅಲ್ಲವೇ ೫ ನಿಮಿಷ ಏನು ಟೈಮ್ ನೋಡಿದ್ದು? ಏನು ಗೂಗಲ್ ಸರ್ಚ್ ಮಾಡಿ ಟೈಮ್ ನೋಡಿದ್ಯಾ ಏನು" ಅಂತ ಅಣಕವಾಡಿದನು ಗುಂಡ. 

ಅಷ್ಟು ಹೇಳಿದ್ದೆ ತಡ , ಎರಡು ಗುದ್ದು ಗುಂಡನ ಮೇಲೆ ಬಿತ್ತು. "ಏನ್ರಿ ಹಾಸ್ಯ ಮಾಡ್ತೀರಾ? ತಾಳಿ ನಾಳೆ ಜಿಲೇಬಿ ಪ್ರೋಗ್ರಾಮ್ ಕ್ಯಾನ್ಸಲ್.  ಮೂರೂ ಹೊತ್ತು ಗಂಜಿ. ಏನಾದ್ರೂ ಮಾಡ್ಕೊಳಿ" ಅಂತ ದರದರನೆ ಮಲಗುವ ಕೋಣೆಗೆ ನುಗ್ಗಿದಳು ನಿಂಗಿ. 

"ಅಯ್ಯೋ ಶಿವನೇ. Joke provoked wife to revoke Jilebi plan" ಅಂತಾ ಗುಂಡನು ಕೂಡಾ ನಿದ್ದೆಗೆ ಜಾರಲು ಅಣಿಯಾದನು.

Wednesday, January 12, 2022

Go without expectations! - The yellow browed bulbul

Sometimes, a casual photo walk culminates in great images. Life without expectations is harder to live but that is way to attain Moksha as per Hindu sacred book "The Bhagavad Geetha". Same thing I experience today.

It has been overcast from past 4 days and birding activity was stalled owing to gloomy skies. Today, in hot midday, the sun peeped out for a while but soon hid behind arid clouds. These high clouds neither precipitate nor cool down atmosphere. Such clouds aggravate the humidness in our coastal village which can be muggy even if we are idle. Nevertheless, these are not the things to ponder upon since we can never control the patterns of nature.

I went for relaxation walk to break-out the bird photography pause created by uncanny clouds. The light was poor, implies zero expectations. I went straight nearby canopy where bulbuls were making noise. This canopy actually belongs to them :-). There are red-whiskered, red-vented, grey-headed, flame-throated and yellow-browed bulbuls having home here in canopy. While most of the day, these birds forage inside canopy (except for commoners like red-whiskered and red-vented), sometimes they come out of foliage when there is intense fight or to grab some sun. Today while was gazing near canopy for any lifers, the grass cutting machine booted and made a loud sound during its operation. Voila! What a lifer! The yellow browed bulbul starting calling out loudly out of curiosity or anxiety outside canopy nearby my position. Here are clicks for you before they pushed-off!








More closer now! Sometimes luck shines exuberantly. I walked down the road and they appeared at eye level and much closer than previous sighting. This time, picture clarity was excellent despite ISO at 800. I was elated with the result and happily walked home. The midday work began with enthusiasm after I sighted yellow browed bulbul quite crisply.





I hope to spot the other rare bulbuls at eye level (flame-throated & grey-headed). There are many other birds too in my hot-list which I aspire to capture before I leave from native village!

Birds teach us more than the lesson to be patient. They teach us simplicity equally as well. They are happy to dwell in constrained environment and adjust to everything that comes their way. Despite the atrocities of humans on mother nature, birds are trying to adapt to the ever evolving urban lifestyle. But there is always a threshold. Birds cannot dwell in human habitat. Its up to us to understand the importance of every creature on this earth and conserve the bio-diversity.

Check out my Bird Series blogs here : NKBirdSeries

Wednesday, October 27, 2021

Lot of excitement in backyard forest

26 October 2021

Wow! I just cant decelerate my excitement. Our backyard is crowded with exciting birds and its a pleasure moment for me. Generally I walk straight towards the canopy which is flat. Today for a change I walked uphill and that change was immensely fruitful. See whom did I get during this unconventional walk. For sure, this walk would turn conventional from subsequent day onwards! To start with light was damn poor and I like how the lens+camera reproduced the picture with enough exposure. Especially I like the way 10yr old camera managed to get decent picture despite extremely poor light conditions. Had it been bright sunny day, this would have been memorable birding. Other things I did was to manually set ISO to 400 which gave less grainier images.

The drongos perch high in canopy or at eye level. They are the ones with less shyness and audacious :-D. Except the racket tailed and bronzed drongos, other drongos are quite bold enough to face the humans :-). Today I caught this drongo (not sure ashy or black) nearby my position and it came out quite clear thanks to proximity :-). Here are few shots.



The unusual bulbul call was mistaken with usual red-whiskered-bulbul. The bird was over my head but still ignored. The bird sound though seemed unfamiliar later. To give some confirmation, the bird perched nearby bland tree before flying away. They were like "identify me now" :-). Wow! that is yellow browed bulbul to enjoy! I had some quick shots but again poor light did not allow me to get some crisp shots. Clear shots would have been possible if sun had come out. Hope to capture them more in brighter days.





Similarly bunch of small minivets. One of them was busy munching the worm which it caught in bald vegetation nearby. Lot of close-up picture but again poor light :-(. The final images turned out well due to proximity but still not appealing. Here are few for record. Both female and males perched on same tree








When I was about to enter house gate, the yellow footed green pigeon beckoned by its quasi police van call. I shot couple of its photos to conclude. Once again the low ISO helped a lot with fine image reproduction post image edits!



Spotted dove to end today's birding. They are the ones who pose well without flying away :-)


What went well!

The switching to manual ISO 400 was the most positive outcome. If you have steady hand or light is ample, turn off auto ISO in Av mode (aperture priority mode which I call "a pathetic mode" nowadays) in DSLR. That would prevent plenty of disappointments after post-processing!

What I missed?

The Indian paradise flycatcher with mix of cinnamon+white plumage was fetching its breakfast from nearby canopy. It saw my movement and disappeared into canopy. Hopefully to get some good glimpses soon!

What went bad :-(

There are some troubles too :-(. Yes the street dogs rest in large numbers in open space. They are biggest trouble makers :-(. Today also they did not allow me to peacefully shoot bird with harrowing/horrific barks. The other trouble is that such barking shoo away the birds as well :-(

Check out my Bird Series blogs here : NKBirdSeries

The Malabar Pied Hornbills in my frame

25 October 2021

The hornbills are daily visitors to backyard. Photographing them needs lot of stealth. Today also I was hunting for its presence by tracing the continuous calls emerging from backyard forest. The calls were from inside dense canopy. I waited for long but bird did not come out of canopy. After long wait, I lost hope and followed my usual path. Just when I was about to move on, this hornbill posed over Casuarina tree and I immediately moved uphill. The bird needs sturdy or strong tree to support its heavy body!



I had couple of captures before one of hornbill recognized my presence and flew away. Not an exciting shot but far better! The evening light was poor again :-(. But camera managed to get decent shutter speed which exposed greater details of the bird. Also I reduced ISO to 200 which added more details into the final frame. Here are shots for you!




The interesting part is, the place nearby is primary highway where substantial vehicle/human movements are seen. However, the bird was quiet for long time. But just I started clicking, the bird seemed to fly away. Strange I felt :-(. Wanted couple more close-ups (greedy me!) badly. Last but not least, 2 days back when I was away to kaup town, these birds had perched for nearly 15 mins just behind our house. Luck is not shining yet to capture these beautiful near-threatened birds. Hopefully, I can trace them again close enough. 

Check out my Bird Series blogs here : NKBirdSeries

Some unconventional birding

October 24, 2021

We had to visit the local temple since it was auspicious day. Unconventionally, I had carried camera as well. This bulky gear was difficult to handle inside temple. Hence I decided to carry with me after the religious ceremony concluded. I knew there were birds adjacent to the seasonal stream nearby temple. Majorly cormorants with pinch of hope to spot kingfishers. Yes, there are many cormorants and fortunately Indian cormorants. Wow! I love their striking bluish-green eye! What a beauty it is to behold. I have been looking for Indian cormorant especially to enjoy its eyes :-). The perfect sunlight illuminating the bird accentuated the glow of eye. Here are couple of pictures for you! The birds flew away fast once they noticed me :-(



Later we had yet another ceremony at a different temple. After sumptuous meal, on the way back, we stopped nearby shop for buying vegetables at kaup town. I had yearning for snapping those sparrows from long time. Today, I snapped few of them. The sparrows are not difficult to picture, only aspect needed is time. They are quite a lot in numbers in Kaup town and not shy as well. Here are few. Someday, I will photograph them abundantly before pushing to Bangalore







Check out my Bird Series blogs here : NKBirdSeries

Printfriendly

Related Posts Plugin for WordPress, Blogger...