Sunday, April 1, 2012

ಶ್ರೀರಾಮ-ನವಮಿಗೊಂದು ಹನುಮಂತನ ಸ್ಮರಣೆ

ರಾಮಾಯಣದಲ್ಲಿ ಹನುಮಂತನ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡ. ಶ್ರೀ ವಾದಿರಾಜರು ಹಾಡಿನ ಮೂಲಕ ಹನುಮಂತನ ಸ್ತುತಿ ಮಾಡಿ ಹೊಗಳಿದ್ದಾರೆ. ವಾದಿರಾಜರು ಹಾಡುಗಳು ಬಹಳ ವಿಸ್ತಾರವಾಗಿರುತ್ತವೆ. ಅವರ ಹನುಮಂತನ ಈ ಹಾಡು ಕೂಡ ಬಹಳ ವಿಸ್ತಾರವಾಗಿದೆ. ಈ ಹಾಡಿನಲ್ಲಿ ಪದ್ಯದ ಮೂಲಕ ವಾದಿರಾಜರು ಹನುಮಂತನ ಸಾಹಸಗಾಥೆಯನ್ನು ವಿವರಿಸಿದ್ದಾರೆ. ಹನುಮನು ಸಾಗರ ದಾಟಿದ್ದು, ಜಾನಕಿಗೆ ಮುದ್ರಿಕೆ ನೀಡಿ ತದನಂತರ ಲಂಕೆಯ ಸುಟ್ಟು ಮತ್ತೆ ವಾನರ ಸೇನೆಯ ಮೂಲಕ ರಾವಣನನ್ನು ವಧಿಸಿ, ರಾಮನ ಪಟ್ಟಾಭಿಷೇಕದವರೆಗೂ ಈ ಹಾಡಿನಲ್ಲಿ ವಿವರಣೆ ನೀಡಿದ್ದಾರೆ. ಈ ಹಾಡಿನ ಕೇಂದ್ರ ಬಿಂದು ಹನುಮಂತನೇ ಆಗಿದ್ದಾನೆ. ವಾದಿರಾಜರು ಸರಳ ಭಾಷೆಯಲ್ಲಿ ಹನುಮಂತನ ಗುಣಗಾನ ಮಾಡಿದ್ದಾರೆ.

ಸಾಹಿತ್ಯದಷ್ಟೇ ಸೊಗಸಾಗಿ ಶ್ರೀ ವಿದ್ಯಾಭೂಷಣರು ಮಧ್ಯಮಾವತಿ ರಾಗದಲ್ಲಿ ಹಾಡಿದ್ದಾರೆ. ಸಾಹಿತ್ಯಕ್ಕೆ ಅನುಗುಣವಾಗಿ ರಾಗದ ಛಾಯೆಗಳನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು ೧೭ ನಿಮಿಷದ ಈ ಹಾಡನ್ನು ಕೇಳಿ ಆನಂದಿಸಿ.

ಈ ಹಾಡಿನ ಸಾಹಿತ್ಯ ಹರಿದಾಸ ಸಂಪದದಲ್ಲಿದೆ: http://haridasa.sampada.net/ದಾಸಸಾಹಿತ್ಯ/ಎಷ್ಟು-ಸಾಹಸವಂತ-ನೀನೇ-ಬಲವಂತ/1887

ಹಾಡು ಕೃಪೆ: raaga.com

Yeshtu Sahasavanta

No comments:

Post a Comment

Printfriendly

Related Posts Plugin for WordPress, Blogger...